ಶುಕ್ರವಾರ, ಡಿಸೆಂಬರ್ 30, 2011

ಎರಡು ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ

   ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಡೆಸುವ 'ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು - 56'’ರಲ್ಲಿ, ನಮ್ಮ ಬುಕ್ಸ್ ಬ್ಯಾಂಕಿನಿಂದ ಪ್ರಕಟಿಸಲ್ಪಟ್ಟಿರುವ ಎ.ಬಿ.ಪಾಟೀಲ ಅವರ 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಹಾಗೂ ಎಂ.ಎಸ್.ಧರ್ಮೆಂದ್ರ ಅವರ 'ಹೆಸರೇನಿಡಲಿ?!' ಪುಸ್ತಕ ಬಿಡುಗಡೆ ಸಮಾರಂಭ 2012ರ ಜನವರಿ 1 ನೇ ತಾರೀಖಿನ ಭಾನುವಾರದಂದು ಚಾಮರಾಜಪೇಟೆ ಒಂದನೇ ಮುಖ್ಯರಸ್ತೆಯ ಪ್ರಕಾಶ ಕೆಫೆ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಪುಂಡಲಿಕ ಹಾಲಂಬಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೈಗಾರಿಕಾ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪ್ರಭಾಕರ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಸಾಹಿತಿಗಳಾದ ಕೆ.ಜಿ.ಶಾಂತಯ್ಯನವರು ಈ ಎರಡು ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ. ನಮ್ಮ ಬುಕ್ಸ್ ಬ್ಯಾಂಕಿನ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಕೆ.ಗಣೇಶಕೋಡೂರು ಅವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಮಾರಂಭಕ್ಕೆ ಮೊದಲು ಲಘು ಉಪಾಹಾರದ ವ್ಯವಸ್ಥೆ ಇದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ