ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತ್ಮೂರನೇ ಪ್ರಕಟಣೆ - ಖಾಲಿ ಪುಟದ ಕವನ

ಬ್ಲಾಗ್ ಹಾಗೂ ಫೇಸ್ ಬುಕ್ ಮೂಲಕವೇ ತಮ್ಮ ಕವನಗಳನ್ನು ಪ್ರಕಟಿಸುತ್ತಾ ಕವಿಯಾಗಿ ಬೆಳೆದು ನಿಂತ ದೊಡ್ಡಮನಿ ಎಂ.ಮಂಜುನಾಥ ಅವರ ಕವನ ಸಂಕಲನ 'ಖಾಲಿ ಪುಟದ ಕವನ'
ಬೆನಕ ಬುಕ್ಸ್ ಬ್ಯಾಂಕಿನಿಂದ ಈಗಾಗಲೇ 'ಮಂಜು ಕರಗುವ ಮುನ್ನ' ಎನ್ನುವ ಕವನ ಸಂಕಲನವನ್ನು ಪ್ರಕಟಿಸಿರುವ ದೊಡ್ಡಮನಿ ಎಂ.ಮಂಜುನಾಥ ಅವರ 57 ಕವನಗಳನ್ನೊಳಗೊಂಡ ಸಂಕಲನವೇ 'ಖಾಲಿ ಪುಟದ ಕವನ'. ಈ ಕವನ ಸಂಕಲನಕ್ಕೆ ಚಿತ್ರ ಸಾಹಿತಿ ಕವಿರಾಜ್ ಅವರು ಬೆನ್ನುಡಿ ಬರೆದಿದ್ದರೆ, ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅವರು ಮುನ್ನುಡಿ ಬರೆದಿದ್ದಾರೆ. ಮುನ್ನುಡಿಯಲ್ಲಿ ದೊಡ್ಡರಂಗೇಗೌಡರು, 'ಈ ಯುವಕವಿಗೆ ಹೇಳಿಕೊಳ್ಳಲಾಗದ ಯಾತನೆಗಳಿವೆ. ಅವು ಸಮಯ ಸಂದರ್ಭ ಬಂದಾಗ ನುಗ್ಗಿ ಬಂದು ವಾಗರ್ಥ ಕಂಡು ಧ್ವನಿ ಪಡೆದು ಕವಿತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸ್ವೋಪಜ್ಞ ಕಹಳೆ ಮೊಳಗಿಸುತ್ತವೆ' ಎಂದು ಬರೆದಿರುವ ಸಾಲುಗಳು ದೊಡ್ಡಮನಿ ಎಂ.ಮಂಜುನಾಥ ಅವರ ಕವಿತೆಯ ಭವಿಷ್ಯದ ಚಿತ್ರಣವನ್ನು ನೀಡುತ್ತವೆ.
ಈ ಪುಸ್ತಕ 72 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 55 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ